Episodes

Wednesday Sep 28, 2011
Touch books get Shataavadhani's touch
Wednesday Sep 28, 2011
Wednesday Sep 28, 2011
‘...ಟಚ್’ ಪುಸ್ತಕಗಳಿಗೆ ಶತಾವಧಾನಿಯ ಹಸ್ತ ಸ್ಪರ್ಶ!
ಜುಲೈ 3,2011ರಂದು ಬೆಂಗಳೂರಿನಲ್ಲಿ ನಡೆದ ‘ಸ್ನೇಹಸ್ಪರ್ಶ’ (ಪರಾಗಸ್ಪರ್ಶ ಓದುಗಬಳಗದ ಸ್ನೇಹಸಮ್ಮಿಲನ ಮತ್ತು ‘ಗೆಲುವಿನ ಟಚ್’ ಹಾಗೂ ‘ಚೆಲುವಿನ ಟಚ್’ ಪುಸ್ತಕಗಳ ಬಿಡುಗಡೆ ಸಮಾರಾಂಭ)ಕ್ಕೆ ಶತಾವಧಾನಿ ಡಾ.ಆರ್.ಗಣೇಶ್ ಅವರನ್ನೂ ಆಹ್ವಾನಿಸಿದ್ದೆ. ಕಾರಣಾಂತರಗಳಿಂದ ಅವರಿಗೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುವುದಕ್ಕೆ ಆಗಿರಲಿಲ್ಲ. ಆ ದಿನಗಳಲ್ಲಿ ಅವರು ಯಾವುದೋ ಕೃತಿರಚನೆಗೆ ಸಂಬಂಧಿಸಿದಂತೆ ಅಧ್ಯಯನನಿರತರಾಗಿದ್ದರಿಂದ ಅವರನ್ನು ಭೇಟಿಯಾಗಿ ಪುಸ್ತಕಗಳ ಗೌರವಪ್ರತಿಯನ್ನು ಕೊಡುವುದು ನನಗೂ ಸಾಧ್ಯವಾಗಿರಲಿಲ್ಲ. ಆದರೂ, ಸ್ನೇಹಸ್ಪರ್ಶದಲ್ಲಿ ಭಾಗವಹಿಸಿದ್ದ ಓದುಗಮಿತ್ರ ಬೆಂಗಳೂರಿನ ಸುಬ್ರಹ್ಮಣ್ಯಂ ಕೆಂದೋಳೆ (ಶತಾವಧಾನಿ ಅವರ ಒಡನಾಟವುಳ್ಳವರು) ಅವರ ಬಳಿ ಪುಸ್ತಕಗಳ ಪ್ರತಿಯನ್ನು ಕೊಟ್ಟು ಡಾ.ಗಣೇಶ್ ಅವರಿಗೆ ತಲುಪಿಸುವಂತೆ ವಿನಂತಿಸಿದ್ದೆ. ಸುಬ್ರಹ್ಮಣ್ಯಂ ಅವರು ಮೊನ್ನೆ ಶತಾವಧಾನಿಯವರ ಮನೆಗೆ ಹೋಗಿ (ಬೆಂಗಳೂರಿನಲ್ಲಿ ರಾಜಾಜಿನಗರದಲ್ಲಿದೆ) ನನ್ನ ಪರವಾಗಿ ’ಗೆಲುವಿನ ಟಚ್’ ’ ‘ಚೆಲುವಿನ ಟಚ್’ ಪುಸ್ತಕಗಳನ್ನು ಅವರಿಗೆ ಹಸ್ತಾಂತರಿಸಿದರು. ಅತ್ಯಂತ ಸಂತೋಷದಿಂದ ಪುಸ್ತಕಗಳನ್ನು ಸ್ವೀಕರಿಸಿದ ಡಾ.ಆರ್.ಗಣೇಶ್ ಕೂಡಲೆಯೇ ಅವುಗಳನ್ನು ತೆರೆದು ಕಣ್ಣಾಡಿಸಿ ಮುಕ್ತಕಂಠದ ಪ್ರಶಂಸೆ ವ್ಯಕ್ತಪಡಿಸಿ ಕೆಲವು ಭಾಗಗಳ ಬಗ್ಗೆ ಸುಬ್ರಹ್ಮಣ್ಯಂ ಅವರೊಂದಿಗೆ ಸೋದಾಹರಣವಾಗಿ ವಿಚಾರವಿನಿಮಯ ಸಹ ಮಾಡಿದರಂತೆ! ಆ ಸಂದರ್ಭದ ಕೆಲವು ಚಿತ್ರಗಳನ್ನು ಸುಬ್ರಹ್ಮಣ್ಯಂ ಅವರು ನನಗೆ ಕಳಿಸಿದ್ದಾರೆ. ಅವುಗಳನ್ನಿಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇನೆ. [ಅಂದಹಾಗೆ ‘ಗೆಲುವಿನ ಟಚ್’ ಮತ್ತು ‘ಚೆಲುವಿನ ಟಚ್’ ಪುಸ್ತಕಗಳು (ಪ್ರಕಾಶಕರು: ಗೀತಾ ಬುಕ್ ಹೌಸ್, ಮೈಸೂರು) ಬೆಂಗಳೂರಿನ ಸಪ್ನಾ, ಅಂಕಿತ, ನವಕರ್ನಾಟಕ, ಟೋಟಲ್ಕನ್ನಡ ಮುಂತಾದ ಪುಸ್ತಕಮಳಿಗೆಗಳಲ್ಲಿ, ಹಾಗೂ ಕರ್ನಾಟಕದ ಪ್ರಮುಖ ಪಟ್ಟಣಗಳ ಪುಸ್ತಕದಂಗಡಿಗಳಲ್ಲಿ ಮಾರಾಟವಾಗುತ್ತಿವೆ.]





Version: 20241125
No comments yet. Be the first to say something!